ಪ್ರಕಾಶಮಾನ ಪದ್ಯಗಳು
(ದೀಪಾವಳಿ ಹೊತ್ತಿಗೆ)
*************************
ಡಾ.ಪ್ರಕಾಶ ಗ.ಖಾಡೆ
ಯಾರು ಹಚ್ಚಿಟ್ಟರೂ
ದೀಪಗಳ ಸಾಲು
ಕಳೆಯುವದು ಕತ್ತಲೆ
ಬೆಳಕದುವೆ ಮೇಲು.
****
ಉಳ್ಳವರು ಹಚ್ಚಿದ್ದಾರೆ
ತುಪ್ಪದ ದೀಪ ,
ಕರಗಿಸಿ ಬೆಣ್ಣೆ
ಗುಡಿಸಲ ಮಕ್ಕಳು
ಹಸಿದಿದ್ದಾರೆ
ಹಾಕಲು ಇಲ್ಲ,
ಒಗ್ಗರಣೆಗೆ ಎಣ್ಣೆ.
******
ಹಣತೆ ತುಂಬ ಎಣ್ಣೆ ಬತ್ತಿ
ಪ್ರಜ್ವಲಿಸುವ ಬೆಳಕು
ಕರಗಿ ಕತ್ತಲು ಹಸನಾಗಲಿ
ನೊಂದವರ ಬದುಕು
(ದೀಪಾವಳಿ ಹೊತ್ತಿಗೆ)
*************************
ಡಾ.ಪ್ರಕಾಶ ಗ.ಖಾಡೆ
ಯಾರು ಹಚ್ಚಿಟ್ಟರೂ
ದೀಪಗಳ ಸಾಲು
ಕಳೆಯುವದು ಕತ್ತಲೆ
ಬೆಳಕದುವೆ ಮೇಲು.
****
ಉಳ್ಳವರು ಹಚ್ಚಿದ್ದಾರೆ
ತುಪ್ಪದ ದೀಪ ,
ಕರಗಿಸಿ ಬೆಣ್ಣೆ
ಗುಡಿಸಲ ಮಕ್ಕಳು
ಹಸಿದಿದ್ದಾರೆ
ಹಾಕಲು ಇಲ್ಲ,
ಒಗ್ಗರಣೆಗೆ ಎಣ್ಣೆ.
******
ಹಣತೆ ತುಂಬ ಎಣ್ಣೆ ಬತ್ತಿ
ಪ್ರಜ್ವಲಿಸುವ ಬೆಳಕು
ಕರಗಿ ಕತ್ತಲು ಹಸನಾಗಲಿ
ನೊಂದವರ ಬದುಕು
*******
ದೀಪದಿಂದ ದೀಪ ಹೊತ್ತಿ
ತುಂಬಿ ಬರಲಿ ಬೆಳಕು
ಶ್ರಮದ ದುಡಿಮೆಗೆ ತಕ್ಕಫಲಿತ
ಸಿಗಲಿ ಎಲ್ಲ ಕಾಲಕು .
*******
ಮನದ ಕತ್ತಲೆಯ
ಕಳೆಯಲು ಬೇಕು
ಅಕ್ಷರದ ರೂಪ
ಜಗದ ಕತ್ತಲೆಯ
ಕಳೆಯಲು ಸಾಕು
ಬೆಳಗುವ ದೀಪ
*******
ಕತ್ತಲಲ್ಲಿ ಹಚ್ಚಿಟ್ಟಿದ್ದಾರೆ
ಎಷ್ಟೊಂದು ಜ್ಯೋತಿ ;
ಹಬ್ಬಿದೆ ಎಲ್ಲಕಡೆ ಬೆಳಕಿನ ದೀಪ್ತಿ.
ಮೂಡಣ ಸೂರ್ಯ
ಮೂಡುವ ಹೊತ್ತಿಗೆ
ಅರೇ ಮರೆಯಾಯಿತೇಕೆ
ಥಳಕು ಬಳುಕಿನ ಕಾಂತಿ.
***********
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ತುಂಬಿ ಬರಲಿ ಬೆಳಕು
ಶ್ರಮದ ದುಡಿಮೆಗೆ ತಕ್ಕಫಲಿತ
ಸಿಗಲಿ ಎಲ್ಲ ಕಾಲಕು .
*******
ಮನದ ಕತ್ತಲೆಯ
ಕಳೆಯಲು ಬೇಕು
ಅಕ್ಷರದ ರೂಪ
ಜಗದ ಕತ್ತಲೆಯ
ಕಳೆಯಲು ಸಾಕು
ಬೆಳಗುವ ದೀಪ
*******
ಕತ್ತಲಲ್ಲಿ ಹಚ್ಚಿಟ್ಟಿದ್ದಾರೆ
ಎಷ್ಟೊಂದು ಜ್ಯೋತಿ ;
ಹಬ್ಬಿದೆ ಎಲ್ಲಕಡೆ ಬೆಳಕಿನ ದೀಪ್ತಿ.
ಮೂಡಣ ಸೂರ್ಯ
ಮೂಡುವ ಹೊತ್ತಿಗೆ
ಅರೇ ಮರೆಯಾಯಿತೇಕೆ
ಥಳಕು ಬಳುಕಿನ ಕಾಂತಿ.
***********
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ