ಭಾನುವಾರ, ನವೆಂಬರ್ 3, 2013

ಪ್ರಕಾಶಮಾನ ಪದ್ಯಗಳು
       (ದೀಪಾವಳಿ ಹೊತ್ತಿಗೆ)
*************************

ಡಾ.ಪ್ರಕಾಶ ಗ.ಖಾಡೆ

ಯಾರು ಹಚ್ಚಿಟ್ಟರೂ
ದೀಪಗಳ ಸಾಲು
ಕಳೆಯುವದು ಕತ್ತಲೆ
ಬೆಳಕದುವೆ ಮೇಲು. 
   
****
ಉಳ್ಳವರು ಹಚ್ಚಿದ್ದಾರೆ
ತುಪ್ಪದ ದೀಪ ,
ಕರಗಿಸಿ ಬೆಣ್ಣೆ

ಗುಡಿಸಲ ಮಕ್ಕಳು 
ಹಸಿದಿದ್ದಾರೆ
ಹಾಕಲು ಇಲ್ಲ,
ಒಗ್ಗರಣೆಗೆ ಎಣ್ಣೆ.

******
ಹಣತೆ ತುಂಬ ಎಣ್ಣೆ ಬತ್ತಿ
ಪ್ರಜ್ವಲಿಸುವ ಬೆಳಕು
ಕರಗಿ ಕತ್ತಲು ಹಸನಾಗಲಿ
ನೊಂದವರ ಬದುಕು
*******
ದೀಪದಿಂದ ದೀಪ ಹೊತ್ತಿ
ತುಂಬಿ ಬರಲಿ ಬೆಳಕು
ಶ್ರಮದ ದುಡಿಮೆಗೆ ತಕ್ಕಫಲಿತ
ಸಿಗಲಿ ಎಲ್ಲ ಕಾಲಕು .
*******
ಮನದ ಕತ್ತಲೆಯ 
ಕಳೆಯಲು ಬೇಕು 
ಅಕ್ಷರದ ರೂಪ

ಜಗದ ಕತ್ತಲೆಯ
ಕಳೆಯಲು ಸಾಕು
ಬೆಳಗುವ ದೀಪ
*******
ಕತ್ತಲಲ್ಲಿ ಹಚ್ಚಿಟ್ಟಿದ್ದಾರೆ
ಎಷ್ಟೊಂದು ಜ್ಯೋತಿ ;
ಹಬ್ಬಿದೆ ಎಲ್ಲಕಡೆ ಬೆಳಕಿನ ದೀಪ್ತಿ.

ಮೂಡಣ ಸೂರ್ಯ
ಮೂಡುವ ಹೊತ್ತಿಗೆ
ಅರೇ ಮರೆಯಾಯಿತೇಕೆ
ಥಳಕು ಬಳುಕಿನ ಕಾಂತಿ.
***********
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ