ಗುರುವಾರ, ಡಿಸೆಂಬರ್ 5, 2013

ಸಾಲು ಸಾಲು ಹನಿಗಳು.


ಸಾಲು ಸಾಲು ಹನಿಗಳು.

************************

ಡಾ.ಪ್ರಕಾಶ ಗ.ಖಾಡೆ


ಮೌನದ ಪ್ರಸವ ಕಾಲದಲ್ಲಿ
ಕಾವ್ಯ ಹುಟ್ಟು ಪಡೆದಂತೆ :
ಲಯ ಭಾವ ವಸ್ತುಗಳು
ಮೈದುಂಬಿಕೊಳ್ಳುತ್ತವೆ.
************
ಯಾರು ನುಡಿಸಿದರು
ನಾದ ಲೋಕದ ತಂತಿ :
ಕಳೆದು ಹೋಗಿದೆ ಮನದಲ್ಲಿ
ಮಡುಗಟ್ಟಿದ ಭ್ರಾಂತಿ.
**********
ಪಲ್ಲಕ್ಕಿ ಮೇಲೆ
ಕುಳಿತಿದ್ದಾರೆ ಪ್ರಭುಗಳು :
ಹೊರುವವರಿಗಾಗಿ
ಕಾಯುತ್ತಿದ್ದಾರೆ ಹಿಂಬಾಲಕರು.
***********

ಗುಡ್ಡ ಕೊರೆದು
ದಾರಿ ಮಾಡಿದ್ದಾರೆ :
ಅಡ್ಡ ಬಂದ ಪ್ರಾಣಿ ಪಕ್ಷಿಗಳಿಗೂ
ದಾರಿ ತೋರಿಸಿದ್ದಾರೆ.
***********
ಒಡೆದ ಚೂರುಗಳಲ್ಲಿ
ಜೋಡಿಸಿಟ್ಟ ರೂಪ :
ಮನಸ್ಸಿನ ಮೂಲೆಯಲ್ಲುಳಿದ
ತೇವಗೊಂಡ ದೀಪ.
***********
ಬೃಹದಾಕಾರವಾಗಿ
ಬೆಳೆಯುತ್ತಿದೆ ಗೋಡೆ :
ಬಯಲುಗಳ ಅಳಿಸಿ
ಮೀರಿ ಎಲ್ಲ ಅಡೆ ತಡೆ.
***********
ಮನದ ಭಾವಗಳು
ರೂಪುಗೊಳ್ಳುವ ಹೊತ್ತು :
ಕವಿತೆಗೆ ಹೇಳಿ ಕಳಿಸಿ
ಬಿಟ್ಟಿರಬೇಡ ಬಹಳ ಹೊತ್ತು.
***********
ಅಗಲಿಕೆಯಲ್ಲಿ ಉಳಿದ
ಫಲಿತ ಶೋಕ :
ನೆನಪುಗಳಿಗೆ ಸಮನಿಲ್ಲ
ಯಾವ ಗ್ರಂಥದ ಶ್ಲೋಕ.
*************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ