ಮತ್ತೆ ಮತ್ತೇ ಹನಿಗಳು.
ಡಾ.ಪ್ರಕಾಶ ಗ.ಖಾಡೆ.
ಯಾರು ಪೋಣಿಸಿಟ್ಟೀರಿ ಇಲ್ಲಿ
ಪದಗಳಲ್ಲಿ ಹುದುಗಿದ ಮಾಲೆ :
ಎಷ್ಟೊಂದು ಮೈಚೆಲ್ಲಿವೆ ಹೂವರಾಶಿ
ನಮ್ಮೊಲುಮೆಯ ತೇರಿಗೆ.
*****
ಅಲ್ಲಿ ಮಾತುಗಳಿಗೆ
ಸುಮ್ಮನಿರಿಸುವ ಧಾವಂತ :
ಹೇಳಬೇಕಾದವರು
ನೋಡುತ್ತಿದ್ದಾರೆ ದಿಗಂತ.
*****
ಎಷ್ಟೊಂದು ಮಾಲೆಗಳು
ಇಲ್ಲಿ ಬಿದ್ದು ಬಿಕರಿಯಾಗಿವೆ :
ಈಗಷ್ಟೇ ಹೋದವರ ಕೊರಳ
ಅಲಂಕರಿಸಿ ಮೆರೆದಾಗಿದೆ.
*****
ಅವಳ ನಗುವಿಗೆ
ಅರ್ಥ ಹುಡುಕುತ್ತಿದ್ದೇನೆ :
ಹುಡುಕಿ ಕೊಡುವುದು ಬೇಡ
ನಿಮ್ಮ ಅರ್ಥಕೋಶದಿಂದ.
*****
ಎಷ್ಟೊಂದು ಧ್ವನಿಗಳು ಏಕವಾಗಿವೆ
ಈ ಲೋಕ ಬಯಲಲ್ಲಿ :
ದಾಖಲಾಗದೇ ಎಲ್ಲಿ ಹೋದವು
ಹುಟ್ಟು ಸಾವಿನ ಬದುಕಿನಲ್ಲಿ.
*****
ಮುಚ್ಚಿದ ಬಾಗಿಲು ಮುಂದೆ
ಕಾವಲು ಕುಳಿತ ನಾಯಿ :
ಮತ್ತೆ ಮತ್ತೆ ಎಚ್ಚರಗೊಂಡು
ಕಾಯುತ್ತಿತ್ತು ಬಂದಾಳೆ, ತಾಯಿ.
*****
ಗಾಯದ ನೋವು
ಮಾಯುತ್ತಾ ಬಂದಂತೆ :
ಕವಿತೆ ಕರಗುತ್ತಾ
ಹೋಗುತ್ತದೆ.
*****
ದೆಹಲಿ ಗದ್ದುಗೆ ಏರಿತು
ಅತಿ ಸಾಮಾನ್ಯ ಪೊರಕೆ.
ಜನತಂತ್ರದ ಉಸಿರಿಗೆ
ಇರಲಿ ಸದಾ ಶಕ್ತಿ ಪೂರೈಕೆ.
*****
ಕಣ್ಣ ತುಂಬಾ ತುಂಬಿಕೊಳ್ಳಿ
ಪ್ರಕೃತಿ ಸೊಬಗ ಐಸಿರಿ;
ನಾಳೆಗಾಗಿ ಉಳಿಸಿ ಬೆಳೆಸಿ
ಮನತುಂಬ ಹರಸಿ.
*****
ರಾತ್ರಿ ಆಗಸದಲ್ಲಿ ಮೆರೆವ
ನಕ್ಷತ್ರಗಳ ಒಡಲು ;
ಬೆಳಕ ಬಯಲಲ್ಲಿ ಬಿತ್ತಿದ
ಥಳಕು ಬಳುಕಿನ ಮಡಿಲು.
ನಕ್ಷತ್ರಗಳ ಒಡಲು ;
ಬೆಳಕ ಬಯಲಲ್ಲಿ ಬಿತ್ತಿದ
ಥಳಕು ಬಳುಕಿನ ಮಡಿಲು.
*****
ಹೇಳದೆ ಬಂದು ಕೇಳದೆ ಹೋದ
ದಾಖಲಾಗದ ಕನಸುಗಳು ;
ಮೌನದಲ್ಲೂ ಮಾತು ಮರೆತ
ಹುಸಿ ಮನದ ಭಾವಗಳು.
ದಾಖಲಾಗದ ಕನಸುಗಳು ;
ಮೌನದಲ್ಲೂ ಮಾತು ಮರೆತ
ಹುಸಿ ಮನದ ಭಾವಗಳು.
*****
ಜಗವೇ ಒಂದು ಗೂಡು
ಒಂದುಗೂಡಲು :ಕಟ್ಟಬೇಡಿ ಅಡ್ಡಗೋಡೆ
ಮನಸ್ಸು ಒಡೆಯಲು.
*****
ಹರಿದ ಹಾಳೆಯಲ್ಲಿ
ಅವಳ ಚಿತ್ರವಿತ್ತು :
ತಾಯ ಮೊಗದ ನಗೆ
ಎಂದೂ ಮಾಸದಂತಿತ್ತು.
ಮನುಕುಲವ ಬೆಸೆದು
ಬಯಲಾಗು ಬೇರು ಬಿಡದೆ.
ಎಷ್ಟು ದೂರ ಸಾಗಿದರೂ
ಎಲ್ಲೂ ಬಾನು ಕೂಡಿದಂತೆ ಕಾಣುತ್ತಿಲ್ಲ ಈ ಇಳೆ.
ತನ್ನ ರೂಪ ಆಕಾರಕ್ಕೆ
ಕಾಯುತ್ತಿಲ್ಲ ನಾಳೆಗೆ.
ತಾಯ ಕನಸಿಗೆ ನಿದಿರೆ ತುಂಬುತಿದೆ
ಅರಳಬೇಕಿನ್ನು ಮಲ್ಲಿಗೆ.
ಹಣೆ ಮಣಿಯಬಾರದು
ಕಂಡವರ ಕಾಲಿಗೆ.
ಅಮ್ಮ ತರುವ
ಹಾಲ್ದೆನೆಯ ಎಳೆ ಸವಿಗೆ.
ಅವಳ ಚಿತ್ರವಿತ್ತು :
ತಾಯ ಮೊಗದ ನಗೆ
ಎಂದೂ ಮಾಸದಂತಿತ್ತು.
*****
ಮನದ ಮೂಲೆಯಲ್ಲಿ
ಬಿದ್ದುಕೊಂಡಿವೆ
ಆಪ್ತವಾಗದ ಭಾವಗಳು ;
ಹರಿದು ಬಿಸಾಕಿದ ಹಾಳೆಯಲ್ಲಿ
ಬರೆಯದೇ ಉಳಿದ ಸಾಲುಗಳು.
ಬಿದ್ದುಕೊಂಡಿವೆ
ಆಪ್ತವಾಗದ ಭಾವಗಳು ;
ಹರಿದು ಬಿಸಾಕಿದ ಹಾಳೆಯಲ್ಲಿ
ಬರೆಯದೇ ಉಳಿದ ಸಾಲುಗಳು.
*****
ಎಲ್ಲ ಹೇಳಿ ಮುಗಿಸಿಯಾಗಿದೆ
ಅವರಿವರ ಕಥೆ ;
ಹೇಳದೆ ಸುತ್ತಿಕೊಳ್ಳುತ್ತಿದೆ
ಅರಿವಿಗೆ ಬಾರದ ನಾಗರಿಕತೆ.
ಅವರಿವರ ಕಥೆ ;
ಹೇಳದೆ ಸುತ್ತಿಕೊಳ್ಳುತ್ತಿದೆ
ಅರಿವಿಗೆ ಬಾರದ ನಾಗರಿಕತೆ.
*****
ಮಗುವಿನ ಮುಗ್ದತೆಯಲ್ಲೂ
ಎಷ್ಟೊಂದು ಕವಿತೆಗಳು ;
ಓದುವ ತಾಯಿಯಲ್ಲೂ
ಮಹಾಕಾವ್ಯದ ಬೇರುಗಳು.
ಎಷ್ಟೊಂದು ಕವಿತೆಗಳು ;
ಓದುವ ತಾಯಿಯಲ್ಲೂ
ಮಹಾಕಾವ್ಯದ ಬೇರುಗಳು.
*****
ಊರೂಳಗೆ ಊರು
ತಳದ ಗುರುತು ತಾಗದೆ ;ಮನುಕುಲವ ಬೆಸೆದು
ಬಯಲಾಗು ಬೇರು ಬಿಡದೆ.
*****
ಎಷ್ಟು ದಾರಿ ಸವೆದರೂ
ಎಲ್ಲೂ ಸೇರುವುದಿಲ್ಲ ಒಂದಕ್ಕೊಂದು ರೈಲು ಹಳಿ;ಎಷ್ಟು ದೂರ ಸಾಗಿದರೂ
ಎಲ್ಲೂ ಬಾನು ಕೂಡಿದಂತೆ ಕಾಣುತ್ತಿಲ್ಲ ಈ ಇಳೆ.
*****
ನನ್ನ ಕವಿತೆಗೆ ಹೇಳಲೇನು
ಉಳಿದಿಲ್ಲ ಇಂದಿಗೆ :ತನ್ನ ರೂಪ ಆಕಾರಕ್ಕೆ
ಕಾಯುತ್ತಿಲ್ಲ ನಾಳೆಗೆ.
*****
ಕಡಿದ ಮರದಲ್ಲೂ
ಕೆತ್ತನೆಗೆ ಕಾಯ್ದ ಮೂರತಿ ;
ಹರಿವ ನೀರಲ್ಲೂ
ಬೆಳೆವ ಪೈರಿನ ಕೀರೂತಿ.
ಹರಿವ ನೀರಲ್ಲೂ
ಬೆಳೆವ ಪೈರಿನ ಕೀರೂತಿ.
*****
ಮೌನಕ್ಕೆ ಶರಣಾಗಿದ್ದಾರೆ
ಮಾತು ಬಲ್ಲವರು ;
ಜೋತು ಬಿದ್ದಿವೆ
ಮೋಡಿ ಮಾತಿಗೆ ಕಿವಿಗಳು.
ಮಾತು ಬಲ್ಲವರು ;
ಜೋತು ಬಿದ್ದಿವೆ
ಮೋಡಿ ಮಾತಿಗೆ ಕಿವಿಗಳು.
*****
ಎಂದೋ ಬರೆದ ಚಿತ್ರ
ಹರಿದು ಹಾಕಿದೆ ;
ಚಿಂದಿ ಆಯುವ ಹುಡುಗರು
ಜೋಡಿಸಿಟ್ಟು ನೋಡಿದರು.
ಹರಿದು ಹಾಕಿದೆ ;
ಚಿಂದಿ ಆಯುವ ಹುಡುಗರು
ಜೋಡಿಸಿಟ್ಟು ನೋಡಿದರು.
*****
ಜೋಗುಳ ಕೇಳಿ ಮಗು ಮಲಗಿದೆ
ಮಾತು ಇರಲಿ ಮೆಲ್ಲಗೆ :ತಾಯ ಕನಸಿಗೆ ನಿದಿರೆ ತುಂಬುತಿದೆ
ಅರಳಬೇಕಿನ್ನು ಮಲ್ಲಿಗೆ.
*****
ಕೇಳಿಸಲೆಂದು
ಎಲ್ಲ ಹೇಳಬೇಕಿಲ್ಲ :
ಕಣ್ಣುಗಳಿಗೆ ಮೌನ
ಅರ್ಥವಾಗುತ್ತದೆ.
ಎಲ್ಲ ಹೇಳಬೇಕಿಲ್ಲ :
ಕಣ್ಣುಗಳಿಗೆ ಮೌನ
ಅರ್ಥವಾಗುತ್ತದೆ.
*****
ಕೊಡೆ ಹಿಡಿಯಬಾರದು
ಎಳೆ ಬಿಸಿಲಿಗೆ ;ಹಣೆ ಮಣಿಯಬಾರದು
ಕಂಡವರ ಕಾಲಿಗೆ.
******
ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ ;
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ.
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ.
*****
ಪುಟ್ಟ ಗೂಡಿನಲ್ಲಿ
ಮರಿ ಹಕ್ಕಿ ಕಾಯುತ್ತಿದೆ;ಅಮ್ಮ ತರುವ
ಹಾಲ್ದೆನೆಯ ಎಳೆ ಸವಿಗೆ.
*****
ಕವಿತೆ ಹಲವು
ಅರ್ಥಗಳ ಮೊತ್ತ :
ಈಗ ಹೇಳಿ ಎಲ್ಲಿ ಹೋಯಿತು
ನಿಮ್ಮ ಚಿತ್ತ ?.
ಅರ್ಥಗಳ ಮೊತ್ತ :
ಈಗ ಹೇಳಿ ಎಲ್ಲಿ ಹೋಯಿತು
ನಿಮ್ಮ ಚಿತ್ತ ?.
**********************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಮೊ.9845500890
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ